ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ಸಮತಾ ಟ್ರಸ್ಟ್

Contributed bysavinasha46@gmail.com|Vijaya Karnataka

ಎಚ್‌.ಡಿ.ಕೋಟೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 135ನೇ ಜನ್ಮದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಆದಿಚುಂಚನಗಿರಿ ಮತ್ತು ಸೇಂಟ್‌ ಮೇರಿಸ್‌ ಶಾಲೆಗಳ ಬಳಿ ರಸ್ತೆ ಉಬ್ಬುಗಳಿಗೆ ಸಮತಾ ಟ್ರಸ್ಟ್‌ ಮತ್ತು ನಂಬಿಕೆ ಸಿರಿಧಾನ್ಯ ಕಂಪನಿ ಬಣ್ಣ ಬಳಿದು, ರಿಫ್ಲೆಕ್ಟರ್‌ಗಳನ್ನು ಅಳವಡಿಸಿತು. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತೆ ಹೆಚ್ಚಲಿದೆ.

beautification of road bumps on the occasion of br ambedkars birthday

ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ಸಮತಾ ಟ್ರಸ್ಟ್

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಡಾ.ಬಿ.ಆರ್ .ಅಂಬೇಡ್ಕರ್ ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ಎಚ್ .ಡಿ.ಕೋಟೆಯ ಆದಿಚುಂಚನಗಿರಿ ಶಾಲೆ ಮುಂಭಾಗ ಹಾಗೂ ಸೇಂಟ್ ಮೇರಿಸ್ ಶಾಲೆಯ ಮುಂಭಾಗದ ರಸ್ತೆಯ ಉಬ್ಬುಗಳಿಗೆ ಸಮತಾ ಟ್ರಸ್ಟ್ ಹಾಗೂ ನಂಬಿಕೆ ಸಿರಿಧಾನ್ಯ ಪೌಡರ್ ಕಂಪನಿ ವತಿಯಿಂದ ಬಣ್ಣ ಬಳಿದು, ರಿಪ್ಲೆಕ್ಟ್ ಲೈಟ್ ಅಳವಡಿಸಲಾಯಿತು.

ಈ ರಸ್ತೆಯಲ್ಲಿನಿತ್ಯ ಸಾವಿರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸುವುದರಿಂದ ಅವರ ಹಿತ ದೃಷ್ಟಿಯಿಂದ ಆದಿಚುಂಚನಗಿರಿ ಹಾಗೂ ಸೇಂಟ್ ಮೇರಿಸ್ ಶಾಲೆ ಮುಂಭಾಗ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯಲಾಗಿದೆ.

ನಂಬಿಕೆ ಸಿರಿಧಾನ್ಯ ಕಂಪನಿಯ ಮಾಲೀಕರಾದ ಮಿಲ್ ನಾಗರಾಜು, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಹೈರಿಗೆ ಶಿವರಾಜು, ಸಮತಾ ಟ್ರಸ್ಟ್ ನ ಅಧ್ಯಕ್ಷ ರವೀಂದ್ರ, ಗೌರವಾಧ್ಯಕ್ಷ ಭೀಮನಹಳ್ಳಿ ಸೋಮೇಶ್ , ಕಾರ್ಯದರ್ಶಿ ಮಹೇಶ್ , ಖಜಾಂಚಿ ರಾಘವೇಂದ್ರ, ನಿರ್ದೇಶಕರಾದ ನಾಗೇಶ್ , ಮಹದೇವ, ಕುಮಾರ್ , ಮರಲಿಂಗಯ್ಯ ಹಾಜರಿದ್ದರು.