ಇಂದಿನಿಂದ ಚಿಣ್ಣರ ಚಿಲಿಪಿಲಿ
ಇಳಕಲ್ : ಇಲ್ಲಿನ ನಾಟ್ಯರಾಣಿ ಕಲಾಸಂಘ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಸಾರಥ್ಯದಲ್ಲಿಮಕ್ಕಳ ಉಚಿತ ರಂಗ ತರಬೇತಿ ಶಿಬಿರ ಏ.20 ರಿಂದ ಮೇ 10ರವರೆಗೆ ಹಮ್ಮಿಕೊಂಡಿದೆ.
ಸುವರ್ಣ ರಂಗ ಮಂದಿರದಲ್ಲಿಸುಮಾರು 20 ದಿನಗಳ ಕಾಲ ನಡೆಯುವ ಈ ತರಬೇತಿಗೆ ಉಚಿತ ಪ್ರವೇಶಗಳು ಆರಂಭವಾಗಿವೆ. ಆಸಕ್ತರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಬಹುದು. ಮಾಹಿತಿಗೆ ಉಮಾರಾಣಿ ಬಾರಿಗಿಡದ-9535730006, ಅರುಂಧತಿ ಶಿಗ್ಗಾಂವ, ಉಮೇಶ ಟಂಕಸಾಲಿ-8147810439, ಪ್ರಲ್ಹಾದ ಕುಲಕರ್ಣಿ-8073937743, ಜ್ಯೋತಿ ಚಲವಾದಿ-8147479839 ಹಾಗೂ ಮಹಾಂತೇಶ ಗಜೇಂದ್ರಗಡ-9448008491 ಅವರನ್ನು ಸಂಪರ್ಕಿಸಬಹುದು.

