ಗೊಂದಲ ಸೃಷ್ಟಿಸಿದ್ದ ಕೇರಳದ ವ್ಯಕ್ತಿ ಸಹಜ ಸ್ಥಿತಿಗೆ, ಸಂಬಂಧಿಕರ ವಶಕ್ಕೆ

Contributed byhkhejmadybs@gmail.com|Vijaya Karnataka

ಪಡುಬಿದ್ರಿ, ಹೆಜಮಾಡಿ, ಮೂಲ್ಕಿ ಪರಿಸರದಲ್ಲಿ ಭಯ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಜಯರಾಜ್‌ ಈಗ ಸಹಜ ಸ್ಥಿತಿಗೆ ಬಂದಿದ್ದಾರೆ. ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ತಮ್ಮ ಊರಾದ ಕೇರಳಕ್ಕೆ ಸಂಬಂಧಿಕರೊಂದಿಗೆ ತೆರಳಿದ್ದಾರೆ. ಅವರು ವಿದೇಶದಲ್ಲಿಯೂ ಕೆಲಸ ಮಾಡಿದ್ದರು.

keralas mentally ill man causes turmoil in the city relatives contacted

ವಿಕ ಸುದ್ದಿಲೋಕ ಪಡುಬಿದ್ರಿ

ತಿಂಗಳ ಹಿಂದೆ ಪಡುಬಿದ್ರಿ, ಹೆಜಮಾಡಿ, ಮೂಲ್ಕಿ ಪರಿಸರದಲ್ಲಿಹಗಲು-ರಾತ್ರಿ ಸಾರ್ವಜನಿಕರ ಮನೆಗಳಿಗೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ರೋಗಿ ಸಹಜ ಸ್ಥಿತಿಗೆ ಬಂದು ತನ್ನ ಊರಾದ ಕೇರಳದ ಸಂಬಂಧಿಕರ ವಶ ಸೇರಿದ್ದಾರೆ.

ಕೇರಳ ಮೂಲದ ಜಯರಾಜ್ (55) ಮನೋರೋಗಿಯಾಗಿದ್ದು, ವಿಶುಶೆಟ್ಟಿ ಅಂಬಲಪಾಡಿಯವರು ಸಾರ್ವಜನಿಕರ ನೆರವಿನಿಂದ ರಕ್ಷಿಸಿ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ರೋಗಿ ತನ್ನ ಊರಾದ ಕೇರಳದ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಸಹೋದರಿ ಹಾಗೂ ಸಂಬಂಧಿಕರು ಉಡುಪಿಗೆ ಬಂದು ಕರೆದುಕೊಂಡು ಹೋಗಿದ್ದಾರೆ.

ವ್ಯಕ್ತಿ ಜಯರಾಜ್ ಬಹಳ ವರ್ಷ ಹೊರದೇಶದಲ್ಲಿಕೆಲಸ ಮಾಡಿದ್ದು, ಊರಲ್ಲಿಯೂ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥರಾಗಿ ಕೇರಳದಿಂದ ಉಡುಪಿಗೆ ಬಂದು ಇದೀಗ ಸಹಜ ಸ್ಥಿತಿಗೆ ಬಂದಿದ್ದಾರೆ.

ಡಾ.ವಾಸುದೇವ, ಡಾ.ಸುನಿಲ್ , ಇಸಿಆರ್ ಸಿ ಸುರೇಶ್ , ಸಿಬ್ಬಂದಿಗಳು ಸಹಕರಿಸಿದ್ದರು.

ಫೋಟೋ:19ಎಚ್ ಕೆ3

ಕ್ಯಾ: ಮನೋರೋಗಿ ಜಯರಾಜ್ ಹಾಗೂ ಅವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ ತಂಡ.