ಅಡಕೆ ಉಪ ಉತ್ಪನ್ನ ನಿಷೇಧ ಆದೇಶ ರದ್ದತಿಗೆ ಆಗ್ರಹವಿಕಸುದ್ದಿಲೋಕ ತೀರ್ಥಹಳ್ಳಿ (ಶಿವಮೊಗ್ಗ)
ರಾಜ್ಯವು ದೇಶದಲ್ಲಿಶೇ .60ಕ್ಕಿಂತ ಹೆಚ್ಚು ಅಡಕೆ ಬೆಳೆಯುವ ಪ್ರದೇಶ ಹೊಂದಿದ್ದು, ಅಡಕೆ ಉಪ ಉತ್ಪನ್ನಗಳನ್ನು ನಿಷೇಧಿಸುವ ರಾಜ್ಯ ಸರಕಾರದ ಆದೇಶದಿಂದ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಲ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ರಾಜ್ಯದ 144 ತಾಲೂಕುಗಳ 5.51ಲಕ್ಷ ಎಕರೆ ಪ್ರದೇಶದಲ್ಲಿಅಡಕೆ ಬೆಳೆಯಲಾಗುತ್ತಿದೆ. ಸುಮಾರು 5 ಲಕ್ಷ ಕುಟುಂಬಗಳು ನೇರವಾಗಿ, ಇತರೆ ಅವಲಂಬಿತ 10 ಲಕ್ಷ ಕುಟುಂಬಗಳ ಬದುಕಿಗೆ ಅಡಕೆ ಆಧಾರವಾಗಿದೆ. ಅಡಕೆ ಬೆಳೆಯುವ ರೈತರ ಕುರಿತು ರಾಜ್ಯ ಸರಕಾರ ವಿಶೇಷ ಗಮನಹರಿಸಿ ಆದೇಶ ವಾಪಸ್ ಪಡೆಯಬೇಕು ಎಂದು ನಿಯೋಗ ಆಗ್ರಹಿಸಿತು.
ಈ ಸಂದರ್ಭ ಅಡಕೆ ಬೆಳೆಯುವ ಪ್ರದೇಶದ ಶಾಸಕರಾದ ವಿ.ಸುನಿಲ್ ಕುಮಾರ್ , ಗುಬ್ಬಿ ಶ್ರೀನಿವಾಸ್ , ಕೋನರೆಡ್ಡಿ, ಡಿ.ಜಿ.ಶಾಂತನಗೌಡ, ಕಿರಣ್ ಕುಮಾರ್ ಕೊಡ್ಗಿ, ವೇದವ್ಯಾಸ್ ಕಾಮತ್ , ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
13ತೀರ್ಥ-4-
ತೀರ್ಥಹಳ್ಳಿ ಶಾಸಕ, ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾ ಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿಗುರುವಾರ ಬೆಂಗಳೂರಿನಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.