ವಿಕ ಸುದ್ದಿಲೋಕ ಚಿತ್ರದುರ್ಗನಮ್ಮ ಸಂಸ್ಥೆಯಲ್ಲಿರಾರ ಯಗಿಂಗ್ ತಡೆಯಲು ರಾರ ಯಗಿಂಗ್ ನಿಗ್ರಹ ಸಮಿತಿ ಮತ್ತು ರಾರ ಯಗಿಂಗ್ ನಿಗ್ರಹ ಸ್ಕಾ$್ವತ್ರ್ಯಡ್ ರಚಿಸಲಾಗಿದೆ ಎಂದು ಎಸ್ ಜೆಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಬಿ.ಭರತ್ ತಿಳಿಸಿದರು.
ನಗರದ ಎಸ್ ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ರಾರ ಯಂಗಿಂಗ್ ಪಿಡುಗು ನಿವಾರಣೆ ಮತ್ತು ಜಾಗೃತಿ ಸಪ್ತಾಹದಲ್ಲಿಮಾತನಾಡಿ, ರಾರ ಯಗಿಂಗ್ ನಲ್ಲಿಭಾಗವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೊಸ ವಿದ್ಯಾರ್ಥಿಗಳು ಯಾವುದೇ ರೀತಿಯ ರಾರ ಯಗಿಂಗ್ , ಕಿರುಕುಳದಂತಹ ವರ್ತನೆ ಕಂಡುಬಂದರೆ ಅದನ್ನು ತಕ್ಷಣ ಕಾಲೇಜು ಆಡಳಿತದ ಗಮನಕ್ಕೆ ತರಬೇಕು. ನಮ್ಮ ಸಂಸ್ಥೆಯು ರಾರ ಯಗಿಂಗ್ ಮುಕ್ತ, ಸುರಕ್ಷಿತ ಮತ್ತು ಶಿಸ್ತುಬದ್ಧ ಕ್ಯಾಂಪಸ್ ಆಗಿರಲು ಪ್ರತಿಯೊಬ್ಬ ವಿದ್ಯಾರ್ಥಿಯ ಸಹಕಾರ ಅತ್ಯಗತ್ಯವೆಂದು ನುಡಿದರು.
ಅಡ್ವೊಕೇಟ್ ಎಚ್ .ಬಿ.ದೇವಿಪ್ರಸಾದ್ ಮಾತನಾಡಿದರು.
ಕಾರ್ಯಕ್ರಮದಲ್ಲಿಐಕ್ಯೂಎಸಿ ಸಂಚಾಲಕರಾದ ಡಾ.ಎ.ಎಂ ರಾಜೇಶ್ , ಡಾ.ಎಚ್ .ಜೆ.ಲೋಕೇಶ್ , ಎಸ್ ಜೆಎಂ ಹಾಸ್ಟೆಲ್ ವಾರ್ಡನ್ ಗಳಾದ ಡಾ.ಜೆ.ಸತೀಶ್ , ಪ್ರೊ.ಟಿ.ತನುಜಾ., ರಾರ ಯಗಿಂಗ್ ನಿಗ್ರಹ ಸಮಿತಿಯ ಸಂಯೋಜಕರಾದ ಪ್ರೊ.ಟಿ.ಸುಧಾ, ಪ್ರೊ.ಬಿ.ಹರೀಶ್ , ವಿದ್ಯಾರ್ಥಿ ಕಲ್ಯಾಣ ಸಮಿತಿಯ ಸಂಯೋಜಕ ಡಾ.ಜಿ.ಎಂ.ಅವಿನಾಶ್ , ಮತ್ತಿತರರಿದ್ದರು.
ವಿದ್ಯಾರ್ಥಿಗಳಿಗೆ ರಾರ ಯಗಿಂಗ್ ನಿವಾರಣೆ ಕುರಿತಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.
----
ಫೋಟೊ ಕ್ಯಾಪ್ಷನ್ /22ಸಿಟಿಡಿ31
ಚಿತ್ರದುರ್ಗದ ಎಸ್ ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ರಾರ ಯಗಿಂಗ್ ಪಿಡುಗು ನಿವಾರಣೆ ಮತ್ತು ಜಾಗೃತಿ ಸಪ್ತಾಹ ಕಾರ್ಯಕ್ರಮದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.