ಹೋಟೆಲ್ ನಿಂದ ಚಿನ್ನಾಭರಣ ಕಳವು ಮಾಡಿದ್ದ ವ್ಯಕ್ತಿ ಬಂಧನ

Contributed bymallugoudra461987@gmali.com|Vijaya Karnataka

ಬೆಳಗಾವಿಯ ತಿಲಕವಾಡಿ ಠಾಣೆ ಪೊಲೀಸರು ಹೋಟೆಲ್‌ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಹುಬ್ಬಳ್ಳಿಯ ಅವಿನಾಶ ಐರಸಂಗ ಎಂಬಾತನನ್ನು ಬಂಧಿಸಿದ್ದಾರೆ. ದೇಶಮುಖ ರಸ್ತೆಯ ಉದಯ ಭವನ ಹೋಟೆಲ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಈ ಬಂಧನವಾಗಿದೆ. ಆರೋಪಿಯಿಂದ 95 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಸೇರಿದಂತೆ ಒಟ್ಟು 1,03,000 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

hotel gold theft property worth 103000 rupees seized

ಬೆಳಗಾವಿ: ನಗರದ ಹೋಟೆಲ್ ವೊಂದರಲ್ಲಿಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಿಲಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಅವಿನಾಶ ಐರಸಂಗ (39) ಬಂಧಿತ. ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೇಶಮುಖ ರಸ್ತೆಯ ಉದಯ ಭವನ ಹೋಟೆಲ್ ನಲ್ಲಿಇತ್ತೀಚೆಗೆ ಚಿನ್ನ ಕಳ್ಳತನವಾದ ಕುರಿತು ದೂರು ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. 95 ಸಾವಿರ ರೂ. ಮೌಲ್ಯದ 8.48 ಗ್ರಾಂ ಚಿನ್ನ, ಮೊಬೈಲ್ ಸೇರಿದಂತೆ ಒಟ್ಟು 1,03,000 ರೂ. ಮೌಲ್ಯದ ಸ್ವತ್ತನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ.