ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ ಸಲಹೆ | ರಾಜ್ಯಮಟ್ಟದ ರೈತ ಹುತಾತ್ಮ ದಿನಾಚರಣೆ
ವಿಕ ಸುದ್ದಿಲೋಕ, ಬೈಲಹೊಂಗಲಕೃಷಿ ನಂಬಿ ದುಡಿದರೆ ಆರ್ಥಿಕವಾಗಿ ಸಬಲರಾಗಲು ಕೃಷಿ ಕ್ಷೇತ್ರ ಸಹಕಾರಿ ಆಗುತ್ತದೆ ಎಂದು ನಿಡಸೋಸಿಯ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಅಖಂಡ ಕರ್ನಾಟಕ ರೈತ ಸಂಘದ ಆಶ್ರಯದಲ್ಲಿಮಂಗಳವಾರ ನಡೆದ 46ನೇ ರಾಜ್ಯಮಟ್ಟದ ರೈತ ಹುತಾತ್ಮ ದಿನಾಚರಣೆ ಹಾಗೂ ಹಸಿರು ಶಾಲು ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ‘‘ಸಾವಯವ ಕೃಷಿಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು ರೈತರ ಉದ್ಧಾರಕ್ಕೆ ಶ್ರಮಿಸಿದ ರೈತ ಹೋರಾಟಗಾರರು ಇಂದಿಗೂ ಸ್ಮರಣೀಯವಾಗಿದ್ದಾರೆ,’’ಎಂದರು.