ಬೆಂಗಳೂರಿನ ಶಿವಾಜಿ ನಗರದಲ್ಲಿಪಾದಚಾರಿ ಮಾರ್ಗ ತೆರವುಗೊಳಿಸುವ ಘಟನೆಯಲ್ಲಿಬಂಧಿತರಾದ ನಮ್ಮ ಕರ್ನಾಟಕ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಪಡಕೋಟೆ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನರಗುಂದ ತಾಲೂಕು ನಮ್ಮ ಕರ್ನಾಟಕ ಸೇನೆ ಸಂಘಟಿತ ಸದಸ್ಯರು ಉಪತಹಸೀಲ್ದಾರ್ ಪರಶುರಾಮ ಕಲಾಲ ಅವರ ಮೂಲಕ ಮುಖ್ಯಮಂತ್ರಿ, ಇನ್ನಿತರ ಸಚಿವರಿಗೆ ಮನವಿ ಸಲ್ಲಿಸಿದರು. ರವಿ ಚಿಂತಾಲ, ಮಕ್ತುಮ ಪರಾಸ್ , ಯಶವಂತ ನಡುವಿನಮನಿ, ಡಾ.ಮುತ್ತು ಸುರಕೋಡ, ಬಸವರಾಜ ಚವಡಿ, ಗಣೇಶ ಚಲವಾದಿ, ಮಾಬೂಸಾಬ ನಸಬಿ ಇತರರಿದ್ದರು.