ಪಿಸಿಒಡಿ ನಿವಾರಣೆ ಸುಲಭ

Contributed bybabitha.salian@timesgroup.com|Vijaya Karnataka
easy pcod relief healthy lifestyle and remedies

ಪಿಸಿಒಡಿ ನಿವಾರಣೆ ಸುಲಭ

ಮಹಿಳೆಯರಲ್ಲಿಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿಪಿಸಿಒಡಿ ಕೂಡ ಒಂದು. ಇದು ಸಾಮಾನ್ಯವಾಗಿ 25ರಿಂದ 30 ವಯಸ್ಸಿನ ಮಹಿಳೆಯರಲ್ಲಿಕಾಣಿಸಿಕೊಳ್ಳುತ್ತದೆ. ಬಹುತೇಕ ಮಹಿಳೆಯರಲ್ಲಿಆಹಾರ ಪದ್ಧತಿಯಲ್ಲಿಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಗಂಡಸರಂತೆ ಕೂದಲು ಬರುವುದು ಮುಂತಾದ ಸಮಸ್ಯೆಗಳನ್ನು ಇದರಲ್ಲಿಕಾಣಬಹುದು.

ಅಪರಿಪಕ್ವ ಅಂಡಾಣು: ಅಪರಿಪಕ್ವ ಅಂಡಾಣು ಗರ್ಭಾಶಯದ ಎರಡು ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಒಡಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ28-30 ದಿನಗಳ ಅವಧಿಗೊಮ್ಮೆ ಋುತುಸ್ರಾವವಾಗುತ್ತದೆ. ಋುತುಸ್ರಾವವಾದ 11-14ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡ ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಹಾಗೂ ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿಪಿಸಿಒಡಿ ಸಮಸ್ಯೆ ಇರುತ್ತದೆಯೋ ಅವರಲ್ಲಿಅಂಡಕೋಶದಿಂದ ಬಿಡುಗಡೆಯಾಗದೆ, ಅಲ್ಲಿಯೇ ಅಪರಿಪಕ್ವ ಅಂಡಾಣುಗಳು ನೀರಿನ ಗುಳ್ಳೆಯಂತೆ ಅಂಡಕೋಶದ ಒಳಪದರದ ಮೇಲೆ ಉಳಿದು ಹೋಗುತ್ತವೆ.

ಕಾರಣ: ಹಾರ್ಮೋನ್ ಗಳ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಮಾನಸಿಕ ಒತ್ತಡ, ದೈಹಿಕ ವ್ಯಾಯಾಮದ ಕೊರತೆ, ಆಧುನಿಕ ಆಹಾರ ಪದ್ಧತಿ , ಆನುವಂಶಿಕ ಇತ್ಯಾದಿ ಪಿಸಿಒಡಿ ಸಮಸ್ಯೆಗೆ ಕಾರಣಗಳಾಗಿವೆ. ಕೆಲವೊಮ್ಮೆ ರಕ್ತದಲ್ಲಿಇನ್ಸುಲಿನ್ ಹೆಚ್ಚಾಗಿ ಅದು ಟೆಸ್ಟೋಸ್ಟಿರಾನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ಸ್ಥೂಲಕಾಯಕ್ಕೆ ಕಾರಣವಾಗಿ ಪಿಸಿಒಡಿ ಬರುತ್ತದೆ.

ಲಕ್ಷಣ: ಹೆಚ್ಚಿದ ಆ್ಯಂಡ್ರೋಜನ್ ಹಾರ್ಮೋನ್ ಗಳ ಕಾರಣದಿಂದ ದೇಹ ತೂಕದಲ್ಲಿಹೆಚ್ಚಳ, ಅನಿಯಮಿತ ಋುತುಸ್ರಾವ, ಬಂಜೆತನ, ಅಂಡಾಣು ಬಿಡುಗಡೆಗೆ ಅಡ್ಡಿಯಾಗುವುದು, ಋುತುಚಕ್ರ ವಿಳಂಬ, ಋುತುಸ್ರಾವ ಆಗದಿರುವುದು, ಅತಿ ಕಡಿಮೆ ಅಥವಾ ಯಾವಾಗಲಾದರೊಮ್ಮೆ ಅತಿ ಋುತುಸ್ರಾವ ಉಂಟಾಗುವುದು, ಬೊಜ್ಜು, ರೋಮ ಬೆಳೆಯುವುದು, ಮುಖ, ಎದೆ, ಹೊಟ್ಟೆ, ತೊಡೆಯ ಭಾಗಗಳಲ್ಲಿಅತಿ ರೋಮ ಕಾಣಿಸಿಕೊಳ್ಳುವುದು, ಸುಸ್ತು, ಕೆಲಸದಲ್ಲಿಆಸಕ್ತಿ ಇಲ್ಲದಿರುವುದು, ಭಾವನೆಗಳ ಏರುಪೇರು, ಬೇಗ ಕೋಪ ಬರುವುದು, ದೊಡ್ಡ ಗಾತ್ರದ ಅಂಡಾಶಯ ಮತ್ತು ಅಂಡಾಶಯದ ಮೇಲೆ ಹಲವಾರು ಗುಳ್ಳೆಗಳು, ಋುತುಚಕ್ರ ಮತ್ತು ಋುತುಸ್ರಾವದ ದಿನಗಳಲ್ಲಿಅತಿ ನೋವು ಕಾಣಿಸಿಕೊಳ್ಳುವುದು.

ಪರಿಣಾಮ: ಗರ್ಭ ಧರಿಸಲು ಸಾಧ್ಯವಾಗದಿರುವುದು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್ ಸಮಸ್ಯೆ, ಅಧಿಕ ರಕ್ತಸ್ರಾವ, ಗರ್ಭಕೋಶದ ಕ್ಯಾನ್ಸರ್ , ಎಂಡೋಮೆಟ್ರಿಯಂ, ಕ್ಯಾನ್ಸರ್ , ಖಿನ್ನತೆ, ಹಗಲು ನಿದ್ರೆ, ಗೊರಕೆ ಇತ್ಯಾದಿ ಪಿಸಿಒಡಿಯ ಪರಿಣಾಮಗಳಾಗಿವೆ.

ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ನಲ್ಲಿವ್ಯಕ್ತಿಯ ಮಾನಸಿಕ, ಶಾರೀರಿಕ ಪರಿಸ್ಥಿತಿಗಳನ್ನು ಕೂಲಂಕುಷವಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುವುದು. ಇಲ್ಲಿನ ಕಾನ್ಸಿ$್ಟಟ್ಯೂಷನಲ್ ಚಿಕಿತ್ಸೆಯು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಇಲ್ಲಿರೋಗಿಯ ಹಿಂದಿನ ಚಿಕಿತ್ಸೆಯ ಬಗ್ಗೆ ವಿವರ, ಕುಟುಂಬದ ಹಿನ್ನೆಲೆ ಮತ್ತು ಇನ್ನಿತರ ಮಾಹಿತಿಯ ಜೊತೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ಬಗ್ಗೆ ಮಾಹಿತಿಯನ್ನು ನಮ್ಮ ಕ್ಲಿನಿಕ್ ಗಳಲ್ಲಿನೀಡಲಾಗುತ್ತದೆ ಹಾಗೂ ಚಿಕಿತ್ಸೆಯ ವಿವರ ತಿಳಿಸಲಾಗುತ್ತದೆ ಎಂದು ಈ ಸಂಸ್ಥೆಯ ತಜ್ಞರು ಹೇಳಿದ್ದಾರೆ.

ಬಾಕ್ಸ್

ಆರೋಗ್ಯಕರ ಜೀವನಕ್ಕೆ ಆದ್ಯತೆ

-ಪೌಷ್ಟಿಕ ಆಹಾರ ಸೇವಿಸಿ. ಹೆಚ್ಚು ಸಕ್ಕರೆ, ಉಪ್ಪು, ಕೆಫೀನ್ , ಆಲ್ಕೋಹಾಲ್ ಸೇವಿಸಬೇಡಿ.

-ಧೂಮಪಾನ ಮಾಡಬೇಡಿ. ಅಧಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

-ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿ.

-ತೂಕ ಕಡಿಮೆ ಮಾಡಿ ಅಥವಾ ನಿಯಂತ್ರಣದಲ್ಲಿಡಿ. ಕೊಬ್ಬಿನ ಆಹಾರ ಸೇವಿಸಬೇಡಿ.