(ಬೆಂಗಳೂರಿಗೆ)ಆದಶ್ ರ್ ಪ್ರಜ್ವಲ್ ಗೆ ಗಾಯ

Contributed byYashwanth Kumar|Vijaya Karnataka
adashr prajwal seriously injured in prestigious district cricket tournament
ಆದಶ್ ರ್ ಪ್ರಜ್ವಲ್ ಗೆ ಗಾಯ

ಮೈಸೂರು: ನಗರದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ-20 ಟೂರ್ನಿಯಲ್ಲಿ ಮಹಾರಾಜ ಶಿವಮೊಗ್ಗ ಯೋಧಾಸ್ ಆಟಗಾರ ಆದಶ್ ರ್ ಪ್ರಜ್ವಲ್ ಫೀಲ್ಡಿಂಗ್ ವೇಳೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಇವರು ಪಂದ್ಯದ 12ನೇ ಆಟಗಾರನಾಗಿದ್ದ ಆದಶ್ ರ್ ಯಶ್ ರಾಜ್ ಪೂಂಜ ಬದಲಿಗೆ ಫೀಲ್ಡಿಂಗ್ ಗೆ ಬಂದಿದ್ದರು. ಮೊದಲ ಇನಿಂಗ್ಸ್ ನ 20ನೇ ಓವರ್ ನಲ್ಲಿಎಂ.ಜಿ.ನವೀನ್ ಎಸೆತವನ್ನು ಗುಲ್ಬರ್ಗ ಮಿಸ್ಟಿಕ್ಸ್ ಬ್ಯಾಟ್ಸ್ ಮನ್ ಕ್ರಾಂತಿಕುಮಾರ್ ಬಲವಾಗಿ ಬಾರಿಸಿದರು. ಪಾಯಿಂಟ್ ನಲ್ಲಿದ್ದ ಆದಶ್ ರ್ ಕ್ಷೇತ್ರರಕ್ಷಣೆಗೆ ಮುಂದಾದಾಗ ಚೆಂಡು ಅವರಿಗೆ ಬಡಿಯಿತು. ನೋವಿನಿಂದ ಕುಸಿದ ಅವರನ್ನು ಕೂಡಲೇ ಆಂಬುಲೆನ್ಸ್ ನಲ್ಲಿಆಸ್ಪತ್ರೆಗೆ ಕೊಂಡೊಯ್ಯಲಾಯಿತು.