ಅಡೂರು ಜಾತ್ರೋತ್ಸವ ಆರಂಭ

Contributed byprakashamailankote@gmail.com|Vijaya Karnataka

ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೆ ಮಹೋತ್ಸವ ಬುಧವಾರ ಆರಂಭಗೊಂಡಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.13 ರಿಂದ 20ರ ವರೆಗೆ ಪೂಜೆ, ಭಜನೆ, ಉತ್ಸವಬಲಿ, ತುಲಾಭಾರ ಪ್ರಾರ್ಥನೆ, ಶ್ರೀ ಭೂತಬಲಿ ನಡೆಯಲಿದೆ. ಈ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿವೆ.

aduru festival shree mahalingeshwara fair 2023

ಅಡೂರು: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೆ ಮಹೋತ್ಸವ ಬುಧವಾರ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ನೇತೃತ್ವದಲ್ಲಿವಿವಿಧ ಧಾರ್ಮಿಕ ಕಾರ ್ಯಕ್ರಮಗಳೊಂದಿಗೆ ಆರಂಭಗೊಂಡಿತು.

ಬೆಳಗ್ಗೆ ವಾದ್ಯ ಘೋಷಗಳೊಂದಿಗೆ ಪ್ರಾದೇಶಿಕ ಸಮಿತಿಗಳಿಂದ ಹಸಿರುವಾಣಿ ಸಮರ್ಪಣೆ, ಧ್ವಜಾರೋಹಣ ಕಾರ ್ಯಕ್ರಮಗಳು ನಡೆದವು. ಮಾ.13ರಂದು ಸಂಜೆ 6.50ಕ್ಕೆ ಗಣಪತಿ ಪ್ರಾರ್ಥನೆ, ಉಗ್ರಾಣ ತುಂಬಿಸುವುದು, ಮಾ.14ರಂದು ಬೆಳಗ್ಗೆ 7ಕ್ಕೆ ಬೆಳಗ್ಗಿನ ಪೂಜೆ, 9ರಿಂದ ರುದ್ರಪಾರಾಯಣ, 11ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ, ಸಂಜೆ 4ರಿಂದ ಭಜನೆ, ರಾತ್ರಿ 7ರಿಂದ ಕೈಕೊಟ್ಟಿಕಳಿ, 7.20ರಿಂದ ನೃತ್ಯಸಂಧ್ಯಾ ನೃತ್ಯ ನೂಪುರ ಕಾಸರಗೋಡು ಇವರಿಂದ, 8ರಿಂದ ಉತ್ಸವಬಲಿ, ತುಲಾಭಾರ ಪ್ರಾರ್ಥನೆ, ಶ್ರೀ ಭೂತಬಲಿ ನಡೆಯಲಿದ್ದು, ಮಾ.20ರಂದು ಕೊನೆಗೊಳ್ಳಲಿದೆ.

.....

ಚಿತ್ರ..11ಎಂಯುಹೊರೆಕಾಣಿಕೆ

ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೆ ಮಹೋತ್ಸವ ಬುಧವಾರ ಆರಂಭಗೊಂಡಿತು.