ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರು

Contributed bysudhakara.kannadamoole@timesofindia.com|Vijaya Karnataka

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇಬ್ಬರು ಅನಾರೋಗ್ಯ ಪೀಡಿತರಿಗೆ ಒಟ್ಟು 5 ಲಕ್ಷ ರೂ. ನೆರವು ಬಿಡುಗಡೆಯಾಗಿದೆ. ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ವಾರಿಜಾ ಅವರಿಗೆ 2 ಲಕ್ಷ ರೂ. ಹಾಗೂ ಮಹಮ್ಮದ್ ಅವರಿಗೆ 3 ಲಕ್ಷ ರೂ. ಮಂಜೂರಾಗಿದೆ. ಅಲ್ಲದೆ, ಬೆಂಕಿ ಅವಘಡದಿಂದ ಅಂಗಡಿ ಕಳೆದುಕೊಂಡ ಸಂತೋಷ್ ಅವರಿಗೆ 5 ಲಕ್ಷ ರೂ. ಪರಿಹಾರ ದೊರೆತಿದೆ. ಈ ಮೊತ್ತ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ.

chief minister relief fund approves 5 lakhs assistance

ವಿಕ ಸುದ್ದಿಲೋಕ ಪುತ್ತೂರು

ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 5 ಲಕ್ಷ ರೂ. ನೆರವು ಬಿಡುಗಡೆಯಾಗಿದೆ.

ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಪೆರುವಾಯಿ ಗ್ರಾಮದ ಕೆಳಗಿನ ಮನೆ ನಿವಾಸಿ ವಾರಿಜಾ ಅವರಿಗೆ 2 ಲಕ್ಷ ರೂ. ಹಾಗೂ ಸರ್ವೆ ಗ್ರಾಮದ ಮಹಮ್ಮದ್ ಅವರಿಗೆ 3 ಲಕ್ಷ ರೂ ಪರಿಹಾರ ಧನ ಮಂಜೂರಾಗಿದೆ. ಪರಿಹಾರ ಮೊತ್ತ ಫಲಾನುಭವಿಗಳ ಖಾತೆಗೆ ನೇರ ಜಮಾವಣೆಯಾಗಲಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಬೆಂಕಿ ಆಕಸ್ಮಿಕ ಪರಿಹಾರ : ಬೆಂಕಿ ಅಕಸ್ಮಿಕದಿಂದ ಅಂಗಡಿ ನಾಶವಾದ ಪ್ರಕರಣದಲ್ಲಿಅಂಗಡಿ ಮಾಲೀಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಮಂಜೂರಾಗಿದೆ. ವಿಟ್ಲಹೊರವಲಯದ ಕುಡ್ತಮುಗೇರು ಕೊಳ್ನಾಡು ಸಂತೋಷ್ ಅವರ ಎಲೆಕ್ಟ್ರಿಕಲ್ ಅಂಗಡಿ ಬೆಂಕಿ ಅವಘಡದಿಂದ ಸುಟ್ಟು ಹೋಗಿ ಸುಮಾರು 80 ಲಕ್ಷ ರೂ. ನಷ್ಟ ಸಂಭವಿಸಿತ್ತು. ಪರಿಹಾರಕ್ಕಾಗಿ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದರು. ಶಾಸಕರ ಶಿಫಾರಸ್ಸಿನಂತೆ 5 ಲಕ್ಷ ಪರಿಹಾರ ಮಂಜೂರಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.