ದಾಂಡೇಲಿ: ನಗರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿದಾಖಲಾಗಿದ್ದ ಗರ್ಭಿಣಿಗೆ ತುರ್ತು ರಕ್ತದ ಅವಶ್ಯಕತೆ ಇರುವುದರ ಬಗ್ಗೆ ಮಾಹಿತಿ ತಿಳಿದ ಇಲ್ಲಿಯ ನಗರ ಠಾಣೆಯ ಪಿಎಸ್ ಐ ಕಿರಣ್ ಪಾಟೀಲ್ ಅವರು ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರಕ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಕ್ತದಾನ ಿ ಹಾಗೂ ರಕ್ತದಾನ ಶಿಬಿರದ ಸಂಘಟಕರಾದ ಸುಧೀರ್ ಶೆಟ್ಟಿ ಅವರು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿರುವ ಗರ್ಭಿಣಿಗೆ ತುರ್ತಾಗಿ ಎ-ಪಾಸಿಟಿವ್ ರಕ್ತದ ಅವಶ್ಯಕತೆ ಇದ್ದು, ದಾನಿಗಳು ತಕ್ಷಣವೇ ಸ್ಪಂದಿಸುವಂತೆ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿಮನವಿ ಮಾಡಿದ್ದರು. ಇದನ್ನು ಗಮನಿಸಿದ ಪಿಎಸ್ ಐ ಕಿರಣ್ ಪಾಟೀಲ್ ಅವರು ಆಸ್ಪತ್ರೆಗೆ ಆಗಮಿಸಿ ರಕ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.
ಫೋಟೋ
ದಾಂಡೇಲಿಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿದಾಖಲಾಗಿದ್ದ ಗರ್ಭಿಣಿಗೆ ಪಿಎಸ್ ಐ ಕಿರಣ್ ಪಾಟೀಲ್ ಅವರು ತುರ್ತು ರಕ್ತ ನೀಡಿ ಮಾನವೀಯತೆ ಮೆರೆದರು.

