ಧರ್ಮ ಗುರುಗಳಿಗೆ ಸನ್ಮಾನ

Contributed bypuru.dpete1987@gmail.com|Vijaya Karnataka

ಚಾಮರಾಜನಗರದಲ್ಲಿ ರಂಜಾನ್‌ ಹಬ್ಬದ ಪ್ರಯುಕ್ತ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮೌಲಾನಾ ಆಜಾದ್‌ ಕಮ್ಯೂನಿಟಿ ಹಾಲ್‌ನಲ್ಲಿ ಧರ್ಮ ಗುರುಗಳಿಗೆ ಸನ್ಮಾನ ಮಾಡಿದರು. ಎಲ್ಲರಿಗೂ ಒಳಿತನ್ನು ಬಯಸುವ ಸರ್ವಧರ್ಮದ ಆಶಯವನ್ನು ಅವರು ಸ್ಮರಿಸಿದರು. ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಉಪಸ್ಥಿತರಿದ್ದರು.

honoring religious leaders in chamarajanagar an exemplary gesture by the legislator

ವಿಕ ಸುದ್ದಿಲೋಕ ಚಾಮರಾಜನಗರ

ರಂಜಾನ್ ಹಬ್ಬದ ಹಿನ್ನೆಲೆ ನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಸಭಾಂಗಣದಲ್ಲಿಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಾನಾ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿ ಅಭಿನಂದಿಸಿ ಸಿಹಿ ಹಂಚಿದರು.

ಈ ಸಂದರ್ಭ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘‘ದೇಶದ್ಯಾಂತ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧÜವರು ಸಡಗರದಿಂದ ಆಚರಿಸುತ್ತಿದ್ದು, ಎಲ್ಲರಿಗೂ ಒಳಿತನ್ನು ಬಯಸುವುದು ಸರ್ವಧರ್ಮದ ಆಶಯ. ಹಬ್ಬವನ್ನು ಸಂಭ್ರಮದಿಂದ ಆಚರಿಸಿ,’’ ಎಂದು ಶುಭಾಶಯ ಕೋರಿದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ , ಮಾಜಿ ಅಧ್ಯಕ್ಷರಾದ ಸಯ್ಯದ್ ರಫಿ, ಸುಹೇಲ್ ಆಲಿಖಾನ್ , ಮುಖಂಡರಾದ ಆಯುಬ್ ಖಾನ್ , ನಯಾಜ್ ಪಾಷಾ, ಇಬ್ರಾನ್ ಅಹಮದ್ , ಅಪ್ಸರ್ ಅಹಮದ್ , ಪರ್ವೇಜ್ ಸೈಯದ್ ಇರ್ಷದ್ , ನಗರಸಭಾ ನಾಮ ನಿರ್ದೇಕ ಸ್ವಾಮಿ, ರಾಜು ಸೇರಿದಂತೆ ಮುಸ್ಲಿಂ ಬಾಂಧÜವರು ಹಾಜರಿದ್ದರು.

ಸಿಎಚ್ ಎನ್ 15ಎಸ್ ಎಂಆರ್ 4

ರಂಜಾನ್ ಹಬ್ಬದ ಹಿನ್ನೆಲೆ ಚಾಮರಾಜನಗರದ ಮೌಲಾನಾ ಆಜಾದ್ ಕಮ್ಯೂನಿಟಿಹಾಲ್ ಶಾಸಕ ಸಿ,ಪುಟ್ಟರಂಗಶೆಟ್ಟಿ ಅವರು ನಾನಾ ಮಸೀದಿಗಳ ಧರ್ಮ ಗುರುಗಳನ್ನು ಸನ್ಮಾನಿಸಿ ಅಭಿನಂದಿಸಿದರು.