ವಿಕ ಸುದ್ದಿಲೋಕ ಮಂಗಳೂರು
2026ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರಿಗೆ ಒಂದು ವಾರದಿಂದ ನಡೆಯುತ್ತಿರುವ ಆರೋಗ್ಯ ತಪಾಸಣೆ ಶಿಬಿರ ಬುಧವಾರ ಸಮಾಪನಗೊಂಡಿತು.
ತಪಾಸಣೆ ನಡೆಸಿಕೊಟ್ಟ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ.ಶಿವಪ್ರಕಾಶ್ ಡಿ.ಎಸ್ ., ಜಿಲ್ಲಾಆರ್ ಸಿಎಚ್ ಅಧಿಕಾರಿ ಡಾ.ರಾಜೇಶ್ , ವೈದ್ಯಕೀಯ ತಪಾಸಣಾ ನೋಡೆಲ್ ಅಧಿಕಾರಿ ಡಾ.ಹಿಬ್ಝು ರ್ರಹ್ಮಾನ್ , ವೈದ್ಯರಾದ ಡಾ.ಬಾಷೀತ್ , ಡಾ.ಮನೀಶ್ , ಡಾ.ಅಶ್ವಿನ್ , ಯೆನೆಪೋಯ ಆಸ್ಪತ್ರೆ ವೈದ್ಯರಾದ ಡಾ.ಮೊಹಮ್ಮದ್ ಅಫ್ರಾದ್ ಮತ್ತಿತರರನ್ನು ಜಿಲ್ಲಾಹಜ್ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಸಿ.ಮಹಮೂದ್ ಸನ್ಮಾನಿಸಿದರು.
ಫಾರೂಕ್ ಕಿನ್ಯ, ಇಬ್ರಾಹಿಂ ಕೊಣಾಜೆ, ಇಸ್ಮಾಯಿಲ್ ಕೊಡಾಜೆ, ಪಕೀರಬ್ಬ ಮಾಸ್ಟರ್ , ಇಮ್ರಾನ್ ಅಡ್ಡೂರು, ಉಮರಬ್ಬ ಮಾಸ್ಟರ್ ಬೆಳ್ತಂಗಡಿ, ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು.
ಹಜ್ ನಿರ್ವಹಣಾ ಸಮಿತಿ ಸದಸ್ಯ ಅಹ್ಮದ್ ಬಾವ ಪಡೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಕೊಡಾಜೆ ಪ್ರಾಸ್ತಾವಿಕ ಮಾತನಾಡಿದರು.
ಫೊಟೊ-18ಎಂ-ಹಜ್ ಟೆಸ್ಟಿಂಗ್
ಮಂಗಳೂರಿನಲ್ಲಿಹಜ್ ಯಾತ್ರಿಕರ ಆರೋಗ್ಯ ತಪಾಸಣೆ ಮಾಡಿದ ವೈದ್ಯರನ್ನು ಸನ್ಮಾನಿಸಲಾಯಿತು.

