ವಿಕ ಸುದ್ದಿಲೋಕ ವಿಟ್ಲ
ದ.ಕ. ಜಿಲ್ಲಾದಲಿತ್ ಸೇವಾ ಸಮಿತಿಯ ಮಾಸಿಕ ಸಭೆ ಭಾನುವಾರ ವಿಟ್ಲದ ಅಧ್ಯಾಪಕರ ಸಭಾಭವನದಲ್ಲಿಜಿಲ್ಲಾಧ್ಯಕ್ಷ ಗೋಪಾಲ್ ಕೆ. ನೇರಳಕಟ್ಟೆ ಅಧ್ಯಕ್ಷತೆಯಲ್ಲಿನಡೆಯಿತು.
ಸಭೆಯಲ್ಲಿಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಮುಂದಿನ ತಿಂಗಳು ನಡೆಯುವ ಡಾ. ಬಿ.ಆರ್ . ಅಂಬೇಡ್ಕರ್ ಜಯಂತಿಯಂದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಮವಸ್ತ್ರ ಧರಿಸಿ ಹಾಜರಿರುವಂತೆ ಕೋರಿದರು. ಅಂದು ನಡೆಯುವ ಕಾರ್ಯಕ್ರಮಕ್ಕೆ ಸಂಘದ ಸದಸ್ಯರಿಗೆ ಜವಾಬ್ದಾರಿ ಹಂಚಲಾಯಿತು. ಮುಖ್ಯ ಅತಿಥಿ ಅಳಿಕೆ ಶ್ರೀ ಸತ್ಯಸಾಯಿ ಶಾಲೆಯ ಶಿಕ್ಷಕ ಆನಂದ ನಾಯ್ಕ ಮಲಾರ್ , ಅಂದು ಮಕ್ಕಳಿಗೆ 100 ಬರೆಯುವ ಪುಸ್ತಕದ ಮೌಲ್ಯವನ್ನು ನೀಡು ವುದಾಗಿ ತಿಳಿಸಿದರು.
1703ವಿಟಿಎಲ್ ದಲಿತ್
ಸಭೆಯಲ್ಲಿಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿದರು.

