ಕಿಡಿಗೇಡಿಗಳಿಂದ ಬಾಳೆ ತೋಟ ನಾಶ

Contributed bychethan.bp@timesofindia.com|Vijaya Karnataka

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ ರೈತ ಚಂದ್ರಪ್ಪ ಅವರ ಫಸಲಿಗೆ ಬಂದಿದ್ದ ಬಾಳೆ ತೋಟವನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ ರೈತರು, ಮುಂದಿನ ತಿಂಗಳು ಬರಬೇಕಿದ್ದ ಆದಾಯವನ್ನು ಕಳೆದುಕೊಂಡಿದ್ದಾರೆ. ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವರ ಮೇಲೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vandalism of banana plantation by mischiefs

ಕಿಡಿಗೇಡಿಗಳಿಂದ ಬಾಳೆ ತೋಟ ನಾಶ

ವಿಕ ಸುದ್ದಿಲೋಕ ಕಡೂರು (ಚಿಕ್ಕಮಗಳೂರು)

ತಾಲೂಕಿನ ಅಂಚೆಚೋಮನಹಳ್ಳಿ ಸಮೀಪದ ಡಿ.ಕಾರೇಹಳ್ಳಿ ಗ್ರಾಮದ ಚಂದ್ರಪ್ಪ ಅವರ ಫಸಲಿಗೆ ಬಂದಿದ್ದ ಬಾಳೆ ತೋಟವನ್ನು ಸೋಮವಾರ ರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ.

ರೈತ ಚಂದ್ರಪ್ಪ ಅವರು ಅಂಚೆಚೋಮನಹಳ್ಳಿ ಸರ್ವೆ ನಂ.33ರ 2.30 ಎಕರೆ ಜಮೀನಿನಲ್ಲಿಲಕ್ಷಾಂತರ ರೂ. ವೆಚ್ಚ ಮಾಡಿ 1,500 ಬಾಳೆ ಸಸಿ ಬೆಳೆಸಿದ್ದರು. ಮುಂದಿನ ತಿಂಗಳು ಫಸಲು ಕೈ ಸೇರಲಿತ್ತು. ಅದರೆ, ಕಿಡಿಗೇಡಿಗಳು ಸೋಮವಾರ ರಾತ್ರಿ ತೋಟದಲ್ಲಿದ್ದ ಎಲ್ಲಬಾಳೆಗಿಡಗಳನ್ನು ಕತ್ತರಿಸಿದ್ದಾರೆ.

‘‘ತೋಟದಲ್ಲಿಕೊಳವೆ ಬಾವಿ ಕೊರೆಯಿಸಿ ಬಾಳೆ ಹಾಕಲು ಒಟ್ಟಾರೆ 5 ಲಕ್ಷ ರೂ. ಕೈಸಾಲ ಮಾಡಿದ್ದು, ಇನ್ನೊಂದು ತಿಂಗಳಲ್ಲಿಕನಿಷ್ಠ 15ರಿಂದ 20 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ರಾತ್ರೋರಾತ್ರಿ ಕಿಡಿಗೇಡಿಗಳು ಬಾಳೆ ಗಿಡಗಳನ್ನು ಕಡಿದು ಬದುಕಿಗೆ ಕೊಳ್ಳಿಇಟ್ಟಿದ್ದಾರೆ’’ ಎಂದು ರೈತ ಚಂದ್ರಪ್ಪ ಕಣ್ಣೀರಾದರು.

ಶ್ವಾನದಳದೊಂದಿಗೆ ತೋಟಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ರೈತ ಚಂದ್ರಪ್ಪ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ. ಕಡೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

31ಚೇತನ್ ಪಿ-17

ಕಡೂರು ತಾಲೂಕು ಅಂಚೆಚೋಮನಹಳ್ಳಿಯಲ್ಲಿಕೃಷಿಕ ಚಂದ್ರಪ್ಪ ಅವರ ಬಾಳೆ ತೋಟವನ್ನು ಕಿಡಿಗೇಡಿಗಳು ಕಡಿದು ಹಾಕಿರುವುದು.