ಬಿಜೆಪಿ ಪ್ರಭಾರಿ, ಸಹ ಪ್ರಭಾರಿಗಳ ನೇಮಕ

Contributed byshashidhar.nandikal@timesgroup.com|Vijaya Karnataka

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ 10 ವಿಭಾಗಗಳಿಗೆ ಪ್ರಭಾರಿ ಮತ್ತು ಸಹ ಪ್ರಭಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ವಿಭಾಗಗಳಿಗೆ ನೇಮಕಾತಿ ಮಾಡಲಾಗಿದೆ. ಈ ನೇಮಕಾತಿಗಳು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದೆ. ಪಕ್ಷದ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಈ ಕ್ರಮ ಸಹಕಾರಿಯಾಗಲಿದೆ.

appointment of bjp in charges and co in charges in kannada

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ 10 ವಿಭಾಗಗಳಿಗೆ ಪ್ರಭಾರಿ ಮತ್ತು ಸಹ ಪ್ರಭಾರಿಗಳನ್ನು ನೇಮಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಮೈಸೂರು: ಸ್ವಾಮಿ ಮರುಳಾಪುರ, ಇ.ಸಿ.ನಿಂಗರಾಜುಗೌಡ

ಮಂಗಳೂರು: ಬಿ.ಬಿ.ಭಾರತೀಶ್ , ಜಯಂತ್ ಕೋಟ್ಯಾನ್

ಶಿವಮೊಗ್ಗ: ಆರ್ .ಕೆ.ಸಿದ್ದರಾಮಣ್ಣ, ಆರ್ .ಡಿ.ಹೆಗಡೆ

ಧಾರವಾಡ: ಜಯತೀರ್ಥ ಕಟ್ಟಿ, ಭೋಜರಾಜ ಕರೂದಿ

ಬೆಳಗಾವಿ: ಸಂಜಯ್ ಪಾಟೀಲ್ , ಬಸವರಾಜ ಯಂಕಂಚಿ

ಕಲಬುರಗಿ: ಅರುಣ್ ಶಹಾಪುರ, ಶರಣಪ್ಪ ತಳವಾರ

ಬಳ್ಳಾರಿ: ಅಮರನಾಥ ಪಾಟೀಲ್ , ಚನ್ನಬಸವನಗೌಡ ಪಾಟೀಲ್

ದಾವಣಗೆರೆ: ಟಿ.ಡಿ.ಮೇಘರಾಜ್ , ಎ.ಮುರಳಿ

ಬೆಂಗಳೂರು ಗ್ರಾಮಾಂತರ: ಬ್ಯಾಟರಂಗೇಗೌಡ, ಎಂ.ಕೆ.ವಾಸುದೇವ

ಬೆಂಗಳೂರು: ಎಸ್ .ಎನ್ .ರಾಜಣ್ಣ, ಚಂದ್ರಶೇಖರ ರಾಜು ಮತ್ತು ಕಿರಣ್ ಬಾಬು