ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಗೆ ಸ್ವಾಗತ ಬಜೆಟ್ ನಲ್ಲಿಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸುವ ಘೋಷಣೆಯಾಗಿವುದು ಸಂತೋಷದ ವಿಷಯ. ಸಾಗರ, ಹೊಸನಗರ ತಾಲೂಕಿನಲ್ಲಿಹೆಚ್ಚು ಮಾತನಾಡುವ ಹವ್ಯಕ ಭಾಷೆಯ ಅಭಿವೃದ್ಧಿ ಹಾಗೂ ಅಧ್ಯಯನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದ ಸರಕಾರ ಈ ಮನವಿಗೂ ಪುರಸ್ಕರಿಸಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಇತಿಹಾಸದಲ್ಲಿಕನ್ನಡದ ಮೊದಲ ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ ನಾಟಕ ಹವ್ಯಕ ಭಾಷೆಯಲ್ಲಿತ್ತು ಎಂದು ಭಾಷಾ ತಜ್ಞರು ಗುರುತಿಸಿದ್ದಾರೆ. ಅಕಾಡೆಮಿ ಸ್ಥಾಪನೆ ಹೆಚ್ಚಿನ ಅಧ್ಯಯನಕ್ಕೆ ಪೂರಕವಾಗಲಿದೆ. - ಎನ್ .ಎಸ್ .ರವೀಶ್ ಕುಮಾರ್ , ನಿಟ್ಟೂರು,
ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ ್ಯಕಾರಿಣಿ ಸಮಿತಿ ಸದಸ್ಯರು.

