ಸಂಗಾತಿಯ ಆಯ್ಕೆಗೆ ಸ್ಥಿರತೆಯೇ ಮಾನದಂಡ

Contributed byshubha.hegde@timesgroup.com|Vijaya Karnataka

ಇಂದಿನ ಯುವಪೀಳಿಗೆ ಸಂಗಾತಿ ಆಯ್ಕೆಯಲ್ಲಿ ಭಾವನಾತ್ಮಕ ಸ್ಥಿರತೆ ಮತ್ತು ಆರ್ಥಿಕ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಡೇಟಿಂಗ್‌ ಈಗ ಹೂಡಿಕೆಯಂತೆ ಬದಲಾಗಿದ್ದು, ಸಮಯ ವ್ಯರ್ಥವಾಗಬಾರದೆಂದು ಶಿಸ್ತಿನ ನಿಯಮ ರೂಪಿಸಿಕೊಳ್ಳುತ್ತಿದ್ದಾರೆ. ಲಿಂಕ್‌ಡ್‌ಇನ್‌ ಪ್ರೊಫೈಲ್‌ಗಳನ್ನು ಗಮನಿಸಿ ವೃತ್ತಿಜೀವನದಲ್ಲಿ ಸ್ಥಿರತೆ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಹುಡುಕುತ್ತಿದ್ದಾರೆ. ಸಣ್ಣ ಕಾಫಿ ಭೇಟಿಗಳಿಗೆ ಒಲವು ತೋರುತ್ತಿದ್ದು, ಸಂಬಂಧ ಹಳಸುವಾಗ ಮಾನಸಿಕ ಶಾಂತಿ ಕಾಪಾಡಿಕೊಳ್ಳಲು ಬೇಗನೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

the fusion of love and financial stability the reality of partner selection

ಜೀವನ ಸಂಗಾತಿ ಹೀಗಿದ್ದರೆ ಚಂದ ಎಂಬುದು ಕನಸು. ಹೀಗೇ ಇರಬೇಕು ಎಂಬುದು ವಾಸ್ತವ. ಇದನ್ನೇ ತಮ್ಮ ಸಂಗಾತಿ ಆಯ್ಕೆಯ ಮಾನದಂಡವಾಗಿಸಿಕೊಂಡಿದೆ ಯುವಜನತೆ. ಪ್ರೀತಿ, ಕಾಳಜಿ, ಸೌಂದರ್ಯ ಇವೆಲ್ಲವೂ ಸಂಗಾತಿಯಲ್ಲಿ ಇರಬೇಕು ಎಂಬುದು ಸಹಜ. ಆದರೆ ಇವೆಲ್ಲವನ್ನೂ ಮೀರಿದ ಕೆಲವು ನಿಗದಿತ ಗುಣಗಳಿಗಾಗಿ ಹುಡುಕಾಟ ನಡೆಸುತ್ತಿದೆ ಯುವಪೀಳಿಗೆ. ಈ ಮೂಲಕ ಸಂಗಾತಿ ಆಯ್ಕೆಯಲ್ಲಿಭಾವನಾತ್ಮಕ ಸ್ಥಿರತೆ ಮತ್ತು ಆರ್ಥಿಕ ಭದ್ರತೆ ಸದ್ಯದ ಆದ್ಯತೆ ಎಂದಿದೆ ಹೊಸ ಸಮೀಕ್ಷೆ ವರದಿ. ಶಿಸ್ತಿಗೆ ಆದ್ಯತೆ: ಇಂದು ಡೇಟಿಂಗ್ ಕೇವಲ ಭಾವನೆಗಳ ವಿಚಾರವಲ್ಲ, ಅದೊಂದು ಹೂಡಿಕೆಯಂತೆ ಬದಲಾಗಿದೆ. ಸಮಯ, ಶ್ರಮ ವ್ಯರ್ಥವಾಗಬಾರದೆಂದು ಈಗ ಅದಕ್ಕೊಂದು ಶಿಸ್ತಿನ ನಿಯಮ ರೂಪಿಸಿಕೊಳ್ಳಲಾರಂಭಿಸಿದ್ದಾರೆ. ಅಂದರೆ ಯಾರನ್ನಾದರೂ ಭೇಟಿ ಮಾಡುವ ಮುನ್ನ ಅವರ ನೋಟ, ಮಾತು, ಹವ್ಯಾಸ ಮುಖ್ಯ ಸಂಗತಿಯಲ್ಲ. ಬದಲಿಗೆ ಅವರು ಬದುಕಿನಲ್ಲಿಅಳವಡಿಸಿಕೊಂಡ ಶಿಸ್ತು ವ್ಯಕ್ತಿತ್ವ ಅಳೆಯುವ ಅಳತೆಗೋಲು. ಇದಕ್ಕಾಗಿ ಅವರ ಸಮಯ ಪಾಲನೆಯಿಂದ ಹಿಡಿದು ಪ್ರತಿ ನಡೆನುಡಿಯಲ್ಲಿಶಿಸ್ತನ್ನು ಹುಡುಕಬಹುದು. ಶಿಸ್ತು, ಸಕಾರಾತ್ಮಕ ಗುಣಗಳೇ ಮುಂದಿನ ದಾಂಪತ್ಯ ಬದುಕಿನ ಅಡಿಪಾಯ ಎಂಬ ಲೆಕ್ಕ ಇದರ ಹಿಂದಿದೆ. ಕೇವಲ ವೃತ್ತಿಯಲ್ಲ, ವ್ಯಕ್ತಿತ್ವದ ಗುರುತು: ಶೇ. 40ರಷ್ಟು ಜನರು ಡೇಟಿಂಗ್ ಆ್ಯಪ್ ಗಿಂತ ಲಿಂಕ್ ್ಡಇನ್ ಪ್ರೊಫೈಲ್ ಗಮನಿಸು ತ್ತಿದ್ದಾರೆ. ಇದಕ್ಕೆ ಕಾರಣ ಅವನು ಅಥವಾ ಅವಳು ವೃತ್ತಿಜೀವನದಲ್ಲಿಎಷ್ಟು ಸ್ಥಿರವಾಗಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆಯೇ ಎಂಬುದು ಮುಖ್ಯ. ಆರ್ಥಿಕ ಮತ್ತು ವೃತ್ತಿಪರ ಸ್ಥಿರತೆ ಇದ್ದರೆ ಬದುಕು ಸುಗಮ ಎಂಬ ಪ್ರಾಯೋಗಿಕ ಚಿಂತನೆ ಇಂದಿನವರದ್ದು. ಸಣ್ಣ ಹೆಜ್ಜೆ, ದೊಡ್ಡ ಭದ್ರತೆ: ದುಬಾರಿ ಹೋಟೆಲ್ ನಲ್ಲಿಗಂಟೆಗಟ್ಟಲೆ ಕಳೆಯುವ ಬದಲು ಕೇವಲ 45 ನಿಮಿಷಗಳ ಸಣ್ಣ ಕಾಫಿ ಭೇಟಿಗೆ ಒಲವು ತೋರುತ್ತಿದ್ದಾರೆ ಯುವಜನರು. ಇದು ಹಣದ ಉಳಿತಾಯ. ಅಷ್ಟೆ ಅಲ್ಲ, ಮನಸ್ಸಿಗೆ ಒಪ್ಪದಿದ್ದರೆ ಭಾವನಾತ್ಮಕವಾಗಿ ಅತಿಯಾಗಿ ತೊಡಗಿಸಿ ಕೊಳ್ಳು ವುದನ್ನು ತಪ್ಪಿಸಲು ಇರುವ ಸುಲಭ ಮಾರ್ಗ ಎಂದು ಪರಿಗಣಿಸಿದ್ದಾರೆ. ಬ್ರೇಕಪ್ ಗಿಲ್ಲಸಾವಧಾನ: ಈಗಿನವರು ಸಂಬಂಧ ಹಳಸುವಾಗ ಆಗುವ ನೋವು ಮತ್ತು ಗೊಂದಲ ತಪ್ಪಿಸಲು ಸೂಕ್ತ ಮಾರ್ಗ ಕಂಡುಕೊಂಡಿದ್ದಾರೆ. ಶೇ. 60ರಷ್ಟು ಜನರು ತಮ್ಮ ನಡುವೆ ಏನೂ ಸರಿಯಿಲ್ಲಎಂದಾಗ ದೀರ್ಘಕಾಲ ಎಳೆಯದೆ ಸಂಬಂಧ ಕಡಿದುಕೊಳ್ಳುತ್ತಾರೆ. ಇದು ಮಾನಸಿಕ ಶಾಂತಿ ಕಾಪಾಡಿಕೊಳ್ಳಲು ಕಂಡುಕೊಂಡ ಮಾರ್ಗ. ಒಟ್ಟಿನಲ್ಲಿಸ್ಥಿರತೆಯು ಸಂಬಂಧವನ್ನು ಹೆಚ್ಚು ಪ್ರಬುದ್ಧವಾಗಿಸಬಹುದು ಎನ್ನುವ ಸಂಬಂಧಗಳ ತಜ್ಞರು, ಸಂಬಂಧದಲ್ಲಿಎಲ್ಲವೂ ಕೇವಲ ಲೆಕ್ಕದಲ್ಲೇ ಮುಗಿಯುವುದಿಲ್ಲ. ಅಲ್ಲಿಹೊಂದಾಣಿಕೆ, ಸಂವಹನ, ಭಾವನಾತ್ಮಕ ಬೆಸುಗೆ, ಪರಸ್ಪರ ಆಕರ್ಷಣೆ ಸದಾ ಜೀವಂತವಾಗಿರಬೇಕು ಎನ್ನುತ್ತಾರೆ.