ಗೌರಮ್ಮಗೆ ರೈತ ಮಹಿಳಾ ಪ್ರಶಸ್ತಿ ಪ್ರದಾನ

Contributed bydevarajanayaka75@gmail.com|Vijaya Karnataka

ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಗೌರಮ್ಮ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ವಿಜಯನಗರ ಜಿಲ್ಲಾ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ನೀಡಿದೆ. ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರಮ್ಮ ಅವರು ಸಾವಯವ ಕೃಷಿಯಲ್ಲಿ ಬಾಳೆ, ಅಡಿಕೆ, ನಿಂಬೆ, ನುಗ್ಗೆ, ಕಬ್ಬು ಮತ್ತು ತೆಂಗು ಬೆಳೆಸಿದ್ದಾರೆ. ಸುಮಾರು 800 ಸಾಗುವಾನಿ ಗಿಡಗಳನ್ನು ಬೆಳೆಸಿ 250 ಮರಗಳನ್ನು ಮಾರಾಟ ಮಾಡಿದ್ದಾರೆ.

honor for woman farmer award for gouramma siddalingayya

ಗೌರಮ್ಮಗೆ ರೈತ ಮಹಿಳಾ ಪ್ರಶಸ್ತಿ ಪ್ರದಾನ

ವಿಕ ಸುದ್ದಿಲೋಕ ಹೊಸಪೇಟೆ(ವಿಜಯನಗರ)

ತಾಲೂಕಿನ ಕಾಕುಬಾಳು ಗ್ರಾಮದ ಗೌರಮ್ಮ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ವಿಜಯನಗರ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದೆ.

ಕಲಬುರಗಿಯ ಜೆಸ್ಟ್ ಕ್ಲಬ್ ನ ಸಭಾಂಗಣದಲ್ಲಿಮಂಗಳವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಗೌರಮ್ಮ ಅವರ ಸಾಧನೆಯ ಹಾದಿ:

ಸಾವಯವ ಕೃಷಿ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದ ಗೌರಮ್ಮನವರು 2.1/2 ಎಕರೆಯಲ್ಲಿ9*9 ಅಳತೆಯಲ್ಲಿಬಾಳೆ ಬೆಳೆದಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿ, ಮಧ್ಯದಲ್ಲಿತರಕಾರಿ ಬೆಳೆಸುತ್ತಿದ್ದಾರೆ. ಶೇ.90 ಸಾವಯವ ಕೃಷಿ ಇದಾಗಿದ್ದು, ಸಗಣೆ ಮತ್ತು ಹಸು ಮೂತ್ರ ಬಳಕೆ ಮಾಡುತ್ತಿದ್ದಾರೆ. 1.1/2 ಎಕರೆಯಲ್ಲಿ9*9 ಅಳತೆಯಲ್ಲಿಅಡಿಕೆ ಸಸಿ ನೆಟ್ಟು, ಸಾವಯವ ಗೊಬ್ಬರ ಉಪಯೋಗ ಮಾಡುತ್ತಿದ್ದಾರೆ. 20*20 ಅಳತೆಯಲ್ಲಿಮಲ್ಚಿಂಗ್ (ಪ್ಲಾಸ್ಟಿಕ್ ) ಹೊದಿಕೆ ಹಾಕಿ ಕಳೆ ಬಾರದಂತೆ ನಿಂಬೆ ಮತ್ತು ನುಗ್ಗೆಯನ್ನು ಜೀವಾಮೃತ, ಬೀಜಾಮೃತ ಗೊಬ್ಬರವನ್ನು ನೇರವಾಗಿ ಸಸಿಗಳ ಬೇರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಸುಮಾರು 3 ಎಕರೆಯಲ್ಲಿ5*5 ಅಳತೆಯಲ್ಲಿಕಬ್ಬು ಬೆಳೆಯುತ್ತಿದ್ದಾರೆ. ಬಿಸಿಲು, ಗಾಳಿ, ಬೆಳಕು ಸಮ ಪ್ರಮಾಣದಲ್ಲಿಸಿಗುವುದರಿಂದ ಮತ್ತು ಚಿಕ್ಕ ಟ್ರಾಕ್ಟರ್ ಮೂಲಕ ಕಳೆ ತೆಗೆಯಲು ಅನುಕೂಲಕರವಾಗಿರುವುದರಿಂದ ಈ ವರ್ಷ, 195 ಟನ್ ಕಬ್ಬು ಕಟಾವು ಮಾಡಿದ್ದಾರೆ. ಜಮೀನಿನ ಸುತ್ತ ಸು.225 ತೆಂಗಿನ ಮರಗಳಿದ್ದು, ವರ್ಷಕ್ಕೆ 2 ಸಲ ಗಿಡಗಳನ್ನು ಸ್ವಚ್ಛ ಮಾಡಿಸುತ್ತಿದ್ದಾರೆ. ಸರಕಾರದ ಒಪ್ಪಿಗೆ ಪಡೆದು ಸು.800 ಸಾಗುವಾನಿ ಗಿಡಗಳನ್ನು 1 1/2 ಎಕರೆಯಲ್ಲಿಬೆಳೆಸಿದ್ದಾರೆ. ಸರಕಾರದ ಒಪ್ಪಿಗೆ ಪಡೆದು 250 ಮರಗಳನ್ನು 2025ರಲ್ಲಿಮಾರಾಟ ಮಾಡಿದ್ದಾರೆ. ಈ ರೀತಿ ಕೃಷಿ ಕ್ಷೇತ್ರದಲ್ಲಿಸಾಧನೆ ಮಾಡಿದ ಗೌರಮ್ಮ ಸಿದ್ದಲಿಂಗಯ್ಯ ಅವರಿಗೆ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದೆ.

ಫೋಟೊ:ಎಚ್ ಪಿಟಿ12ದೇವರಾಜ05: ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಗೌರಮ್ಮ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರಕಾರ ವಿಜಯನಗರ ಜಿಲ್ಲಾಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ಲಭಿಸಿದ್ದು, ಕಲಬುರಗಿಯ ಜೆಸ್ಟ್ ಕ್ಲಬ್ ನ ಸಭಾಂಗಣದಲ್ಲಿಮಂಗಳವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಪ್ರಶಸ್ತಿ ನೀಡಿ ಗೌರವಿಸಲಾಯಿತು.