ಕುಂಡಂಗುಳಿ: ಕುಟುಂಬಶ್ರೀ ಜಿಲ್ಲಾಮಿಷನ್ ಮತ್ತು ಬೇಡಡ್ಕ ಪಂಚಾಧಿಯಿಧಿತಿ ಕುಟುಂಬಶ್ರೀ ಸಿ.ಡಿ.ಎಸ್ . ಆಯೋಜಿಸಿದ್ದ ಬೆಟ್ ಸ್ನ್ಯಾಕ್ಸ್ ಫೆಸ್ಟ್ ನ್ನು ಜಿಲ್ಲಾಪಂಧಿಚಾಧಿಯಿಧಿತಿ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿದರು.
ಬೇಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಬೇಡಡ್ಕ ಸಿ.ಡಿ.ಎಸ್ ) ನೇತೃತ್ವದಲ್ಲಿಬೆಟ್ ಬೇಕರಿ ಟೀಮ್ ತನ್ನ ಕಾರ್ಯಾಚರಿಸುತ್ತಿದೆ. ಕುಟುಂಬಶ್ರೀ ಕಾರ್ಯಕರ್ತರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿತಯಾರಿಸಿದ ನಾನಾ ಖಾದ್ಯಗಳ ಲಭ್ಯತೆ, ಕಲಬೆರಕೆಯಿಲ್ಲದ ಮತ್ತು ಮನೆಯಲ್ಲಿತಯಾರಿಸಿದ ಖಾದ್ಯಗಳು. ಕೃಷಿ ಮೌಲ್ಯವರ್ಧಿತ ಉತ್ಪನ್ನಗಳು, ಆಗ್ರೋ ಫಾರ್ಮರ್ಸ್ ಕಂಪನಿಯ ಅಡಿಯಲ್ಲಿವಿಶೇಷ ಖಾದ್ಯಗಳು. ಕುಟುಂಬಶ್ರೀ ಉದ್ಯಮಿಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಪ್ರಚಾರವನ್ನು ಒದಗಿಸುವುದು ಮತ್ತು ಕಾಸರಗೋಡಿನ ವಿಶಿಷ್ಟ ರುಚಿಗಳನ್ನು ಜನರಿಗೆ ತಲುಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಜಿಲ್ಲಾಪಂ. ಆವರಣದಲ್ಲಿನಡೆದ ಕಾರ್ಯಕ್ರಮದಲ್ಲಿಮೊದಲ ಮಾರಾಟವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಐಎಎಸ್ ನಡೆಸಿಕೊಟ್ಟರು. ಕುಟುಂಬಶ್ರೀ ಜಿಲ್ಲಾಮಿಷನ್ ಸಂಯೋಜಕ ರತೀಶ್ ಪಿಲಿಕೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಮಾಹಿತಿ ಅಧಿಕಾರಿ ಎಂ. ಮಧುಸೂಧನನ್ , ಮಾಜಿ ಜಿಲ್ಲಾಪಂಧಿಚಾಧಿಯಿಧಿತಿ ಅಧ್ಯಕ್ಷ ಇ. ಪದ್ಮಾವತಿ, ಚೆಂಗಳ ಸಿಡಿಎಸ್ ಅಧ್ಯಕ್ಷೆ ಸಕೀನಾ, ಶಿವನ್ ಚೂರಿ ಉಪಸ್ಥಿತರಿದ್ದರು.
ಬೇಡಡ್ಕ ಸಿಡಿಎಸ್ ಅಧ್ಯಕ್ಷೆ ಗುಲಾಬಿ ಸ್ವಾಗತಿಸಿದಧಿರು. ಎಡಿಎಂಸಿ ಕೆ.ಎಂ. ಕಿಶೋರ್ ಕುಮಾರ್ ವಂದಿಸಿದರು.
ಚಿತ್ರ..13ಎಂಯುಫೆಸ್ಟ್

