ಶ್ರೀ ಹುಚ್ಚಪ್ಪ ಸ್ವಾಮಿ, ಶಿವಲಿಂಗ ಬಿಂಬ ಪ್ರತಿಷ್ಠಾಪನೆ

Contributed bysri.vknews@gmail.com|Vijaya Karnataka

ಬರಗೂರು ಗ್ರಾಮದಲ್ಲಿ ಶ್ರೀ ಹುಚ್ಚಪ್ಪ ಸ್ವಾಮಿ ಮತ್ತು ಶ್ರೀ ಶಿವಲಿಂಗ ಬಿಂಬ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವು ಎರಡು ದಿನಗಳ ಕಾಲ ಅದ್ಧೂರಿಯಾಗಿ ಜರುಗಿತು. ಭಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ದೇವಾಲಯ ನಿರ್ಮಿಸಲಾಯಿತು. ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಮಹಿಳೆಯರು ಆರತಿ, ತಂಬಿಟ್ಟು, ದೀಪಗಳನ್ನು ಹೊತ್ತು ಮೆರವಣಿಗೆ ನಡೆಸಿದರು. ಜೆಡಿಎಸ್‌ ಮುಖಂಡ ಹೂಡಿ ವಿಜಯ್‌ ಕುಮಾರ್‌ ಸೇರಿದಂತೆ ಹಲವು ಮುಖಂಡರನ್ನು ಅಭಿನಂದಿಸಲಾಯಿತು.

establishment of shri huccappa swami and shiva lingam idol

ವಿಕ ಸುದ್ದಿಲೋಕ ಲಕ್ಕೂರು

ಲಕ್ಕೂರು ಹೋಬಳಿಯ ಬರಗೂರು ಗ್ರಾಮದಲ್ಲಿಭಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಿರುವ ಶ್ರೀ ಹುಚ್ಚಪ್ಪ ಸ್ವಾಮಿ ಹಾಗೂ ಶ್ರೀ ಶಿವಲಿಂಗ ಬಿಂಬ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ, ಕುಂಭಾಭಿಷೇಕ ಕಾರ ್ಯಕ್ರಮಗಳು ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿಪೂಜಾ ಕೈಂಕರ ್ಯಗಳು ನಡೆಯಿತು. ಕಾರ ್ಯಕ್ರಮದ ಅಂಗವಾಗಿ ಗ್ರಾಮದ ಮಹಿಳೆಯರು ದೇವರಿಗೆ ಆರತಿ, ತಂಬಿಟ್ಟು, ದೀಪಗಳನ್ನು ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿ ದೇವರಿಗೆ ಅರ್ಪಿಸಿದರು. ಶ್ರೀ ಹುಚ್ಚಪ್ಪ ಸ್ವಾಮಿ ಹಾಗೂ ಶ್ರೀಶಿವಲಿಂಗ ಬಿಂಬ ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ ದೇವರ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ವಿದ್ಯುತ್ ದೀಪಾಂಕಾರ ಮಾಡಲಾಗಿತ್ತು.

ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿದೇವರಿಗೆ ನಾನಾ ರೀತಿಯ ಪೂಜಾ ಕೈಂಕರ ್ಯಗಳು ನಡೆಯಿತು. ದೇವಾಲಯ ಸಮಿತಿ ವತಿಯಿಂದ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿಜೆಡಿಎಸ್ ಪಕ್ಷದ ಹಲವು ಮುಖಂಡರು, ಕಾರ ್ಯಕರ್ತರು, ಗ್ರಾಮದ ಮುಖಂಡರು ಇನ್ನಿತರರು ಹಾಜರಿದ್ದರು.

30 ಲಕ್ಕೂರು ಪೋಟೊ 2. ಮಾಲೂರು ತಾಲೂಕಿನ ಬರಗೂರು ಗ್ರಾಮದಲ್ಲಿಭಕ್ತರು ಹಾಗೂ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಿರುವ ಶ್ರೀ ಹುಚ್ಚಪ್ಪ ಸ್ವಾಮಿ ಹಾಗೂ ಶ್ರೀ ಶಿವಲಿಂಗ ಬಿಂಬ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ, ಕುಂಭಾಭಿಷೇಕ ಅಂಗವಾಗಿ ದೇವರ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

30 ಲಕ್ಕೂರು ಪೋಟೊ 3. ಬರಗೂರು ಗ್ರಾಮದಲ್ಲಿನೂತನವಾಗಿ ನಿರ್ಮಿಸಿರುವ ಶ್ರೀ ಹುಚ್ಚಪ್ಪ ಸ್ವಾಮಿ ಹಾಗೂ ಶ್ರೀ ಶಿವಲಿಂಗ ಬಿಂಬ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ ಕಾರ ್ಯಕ್ರಮದಲ್ಲಿಭಾಗವಹಿಸಿದ್ದ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.