ವಿಕ ಸುದ್ದಿಲೋಕ ಬೆಂಗಳೂರು
ನೈಋುತ್ಯ ರೈಲ್ವೆ ವ್ಯಾಪ್ತಿಯ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ… ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿಬೆಂಗಳೂರು ಮೂಲಕ ಸಂಚಾರ ನಡೆಸುವ ಜನಶತಾಬ್ದಿ ಹಾಗೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿಬದಲಾವಣೆ ಮಾಡಲಾಗಿದೆ.
ಜೂನ್ 7 ಮತ್ತು 8 ರಂದು ಈ ಎರಡು ರೈಲುಗಳ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ, ನಿಲುಗಡೆ ರದ್ದು, ವಿಳಂಬ ಸಮಸ್ಯೆ ಎದುರಾಗಲಿದೆ. ಜೂನ್ 7 ರಂದು ರಾತ್ರಿ 8:10ಕ್ಕೆ ಕೆಎಸ್ ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ಕೆಎಸ್ ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು (16526) ಬೆಂಗಳೂರು ಕಂಟೋನ್ಮೆಂಟ್ , ಬೈಯಪ್ಪನಹಳ್ಳಿ, ಹೊಸೂರು, ಧರ್ಮಾವರಂ ಮತ್ತು ಸೇಲಂ ಮೂಲಕ ಸಾಗಲಿದೆ. ಇದರ ನಿಲುಗಡೆಯನ್ನು ಕೃಷ್ಣರಾಜಪುರ, ವೈಟ್ ಫೀಲ್ಡ…, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರಿನಲ್ಲಿರದ್ದುಗೊಳಿಸಲಾಗಿದೆ.
ಜೂನ್ 7 ರಂದು ಮಧ್ಯಾಹ್ನ 3:50ಕ್ಕೆ ಚಾಮರಾಜನಗರದಿಂದ ಹೊರಡುವ ಚಾಮರಾಜನಗರ-ತಿರುಪತಿ ಎಕ್ಸ್ ಪ್ರೆಸ್ ರೈಲು (16219) ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಹಿಂದೂಪುರ, ಧರ್ಮಾವರಂ, ಪಾಕಲ ಮತ್ತು ತಿರುಪತಿ ಮಾರ್ಗಕ್ಕೆ ಬದಲಾಯಿಸಲಾಗಿದೆ. ಈ ರೈಲು ಕೃಷ್ಣರಾಜಪುರ, ವೈಟ್ ಫೀಲ್ಡ…, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಾಟ್ಪಾಡಿ ಮತ್ತು ಚಿತ್ತೂರು ನಿಲ್ದಾಣಗಳಿಗೆ ನಿಲುಗಡೆ ನೀಡದೇ ಸಾಗಲಿದೆ.
ಎರ್ನಾಕುಲಂ ಜಂಕ್ಷನ್ ನಿಂದ ಹೊರಡುವ ಎರ್ನಾಕುಲಂ ಜಂಕ್ಷನ್ -ಕೆಎಸ್ ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು (26652) ಜೂನ್ 7 ರಂದು ಮಧ್ಯಾಹ್ನ 2:20ಕ್ಕೆ ಸೇಲಂ, ಓಮಲೂರು, ಹೊಸೂರು, ಬಿಚ್ಚುಪಲ್ಲಿಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಕೃಷ್ಣರಾಜಪುರದಲ್ಲಿನಿಲುಗಡೆ ಮಾಡದೆ ಸಂಚರಿಸಲಿದೆ.
ಇನ್ನು, ಕೊಯಮತ್ತೂರು-ನಿಜಾಮುದ್ದೀನ್ ಕೊಂಗು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು (12647) 4:30ಕ್ಕೆ ಹೊರಡಲಿದೆ. ಈ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೆ, ರೇಣಿಗುಂಟ ಮತ್ತು ಧೋನೆ ಮೂಲಕ ಸಾಗುವಂತೆ ಮಾರ್ಗ ಬದಲಾಯಿಸಲಾಗಿದೆ. ಹೀಗಾಗಿ, ಕೃಷ್ಣರಾಜಪುರ, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ನಿಲುಗಡೆ ರದ್ದುಪಡಿಸಲಾಗಿದೆ.

