ದಿನಭವಿಷ್ಯ 22 ಮೇ 2026
ಶ್ರೀಪತಿ ಭಟ್ | ಬೆಂಗಳೂರು
(ಕಟಕ, ತುಲಾ-ಈ ರಾಶಿಯವರಿಗೆ ಅಮೃತ ಸಿದ್ಧಿ ಯೋಗ)
=----------
ಮೇಷ : ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿನೆಮ್ಮದಿ ಮೂಡುತ್ತದೆ. ಹೊಸ ಉದ್ಯಮ ಆರಂಭಿಸಲು ಬಂಡವಾಳ ಹೂಡಿಕೆ ಮಾಡಬಹುದು. ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)
------------
ವೃಷಭ : ಶ್ರೀಸೂರ್ಯನಾರಾಯಣನ ಸ್ಮರಣೆ ಮಾಡಿದಲ್ಲಿಆರೋಗ್ಯ ವೃದ್ಧಿಯಾಗಲಿದೆ. ಮೈ-ಕೈ ನೋವುಗಳು ಶಮನಗೊಳ್ಳುತ್ತವೆ. ಕೆಲಸಗಳು ನೆರವೇರಲು ತುಸು ಶ್ರಮ ವಹಿಸಬೇಕಾದೀತು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಆಲೀವ್ )
------------
ಮಿಥುನ : ಸ್ನೇಹಿತರ ಕಷ್ಟಗಳಿಗೆ ನೆರವಾಗುವ ಸ್ವಭಾವದಿಂದ ತನ್ನ ಮೇಲೆ ಎಲ್ಲಾಎಳೆದುಕೊಂಡಂತೆ ಆಗಬಹುದು. ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಎಚ್ಚರದಿಂದ ಇರಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂಚು)
--------------
ಕಟಕ: ಪ್ರಾಪಂಚಿಕ ವಿಚಾರವನ್ನು ಬಿಟ್ಟು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಗಮನ ಹರಿಯಲಿದೆ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಕೇಳಿ ಬರಲಿದೆ. ಹಿರಿಯರ ಆಶೀರ್ವಾದ ಲಭಿಸುವುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಗುಲಾಬಿ)
----------------
ಸಿಂಹ : ದೇಹಾರೋಗ್ಯದ ಸಲುವಾಗಿ ಕಾರ್ಯಗಳನ್ನು ಬಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿಸಹವರ್ತಿಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಿ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)
---------------
ಕನ್ಯಾ : ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗಲಿದೆ. ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)
---------------
ತುಲಾ : ದೊಡ್ಡ ವಿಚಾರವೊಂದಕ್ಕೆ ಕೈ ಹಾಕಬೇಕಾದ ಸನ್ನಿವೇಶ ಎದುರಾಗುವುದು. ಆತ್ಮ ಸಂಯಮ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಸಂಸಾರದಲ್ಲಿಸಾಮರಸ್ಯವಿದ್ದು ಮನಸ್ಸಿಗೆ ಶಾಂತಿ ಉಂಟಾಗಲಿದೆ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕಪ್ಪು)
----------------
ವೃಶ್ಚಿಕ : ರಾಜಕೀಯ ಕ್ಷೇತ್ರದಲ್ಲಿರುವವರು ಸೋಲನ್ನು ಒಪ್ಪಿಕೊಳ್ಳಬೇಕಾದ ಮನಸ್ಥಿತಿಯನ್ನು ರೂಢಿಸಿಕೊಳ್ಳಿ. ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗಲಿದೆ.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಹಳದಿ )
-----------------
ಧನು : ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಬಹಿರಂಗಗೊಳ್ಳಲಿವೆ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದ್ದದ್ದಾಗಿರುತ್ತದೆ. ಆತ್ಮಬಲದ ಮೇಲೆ ನಂಬಿಕೆ ಇಡಿ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಹಸಿರು)
---------------------
ಮಕರ : ವ್ಯವಹಾರವು ಊಹಿಸಿದ ವೆಚ್ಚಕ್ಕಿಂತ ಕಡಿಮೆ ಖರ್ಚಿನಲ್ಲಿಸಂಪೂರ್ಣವಾಗುವುದು. ಕೆಲವೊಂದು ಸಾಂಸಾರಿಕ ಸಮಸ್ಯೆಗಳಿಗೆ ಅತ್ಯಂತ ಭಾವುಕರಾಗುವಂತಾಗುವುದು.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಕೆಂಪು)
-----------------
ಕುಂಭ : ದೇವತಾ ಕಾರ್ಯಗಳಲ್ಲಿಭಾಗವಹಿಸುವ ಉದ್ದೇಶದಿಂದ ಪ್ರಯಾಣ ಮಾಡಬೇಕಾಗಬಹುದು. ಅನಾರೋಗ್ಯ ಹೊಂದಿದ ಪತ್ನಿಯ ಆರೋಗ್ಯದಲ್ಲಿಸುಧಾರಣೆ ಕಂಡುಬರುವುದು.
(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಆಕಾಶ ನೀಲಿ)
--------------
ಮೀನ : ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೈವಾಹಿಕ ಮಾತುಕತೆಗಳು ಪ್ರಗತಿ ಪಥದತ್ತ ಸಾಗಲು ಶ್ರೀ ಸೀತಾರಾಮರನ್ನು ಪ್ರಾರ್ಥಿಸಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೇಸರಿ)

