ಸಂಡೂರುಧಿಧಿಧಿ-ಧಿತ್ಯಾಜ್ಯ ವಿಂಗಡಣೆ ಜಾಗೃತಿ

Contributed byverendragoud@gmail.com|Vijaya Karnataka

ಸಂಡೂರು ಪುರಸಭೆ ವತಿಯಿಂದ ತ್ಯಾಜ್ಯ ವಿಂಗಡಣೆ ಜಾಗೃತಿ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರು ಕಸವನ್ನು ಮೂಲದಲ್ಲಿಯೇ 4 ವಿಭಾಗಗಳಾಗಿ ವಿಂಗಡಿಸಿ ಕಸ ಸಂಗ್ರಹ ವಾಹನಕ್ಕೆ ನೀಡಬೇಕು ಎಂದು ಪರಿಸರ ಎಂಜಿನಿಯರ್ ಅನ್ನಪೂರ್ಣ ತಿಳಿಸಿದರು. ಪಟ್ಟಣದ ಪ್ರತಿ ವಾರ್ಡ್‌ಗೆ ದಿನವೂ ಕಸ ಸಂಗ್ರಹ ವಾಹನಗಳು ಬರುತ್ತವೆ. ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು, ಸಂಘಟಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

sandur awareness program for waste segregation into 4 categories

ತ್ಯಾಜ್ಯ ವಿಂಗಡಣೆ ಜಾಗೃತಿ

ವಿಕ ಸುದ್ದಿಲೋಕ ಸಂಡೂರು

‘‘ತ್ಯಾಜ್ಯವನ್ನು 4 ವಿಭಾಗಗಳಲ್ಲಿಮೂಲದಲ್ಲಿಯೇ ವಿಂಗಡಿಸುವ ಮೂಲಕ ಸಾರ್ವಜನಿಕರು ಕಸ ಸಂಗ್ರಹ ವಾಹನಕ್ಕೆ ನೀಡಬೇಕು,’’ ಎಂದು ಪುರಸಭೆ ಪರಿಸರ ಎಂಜಿನಿಯರ್ ಅನ್ನಪೂರ್ಣ ಹೇಳಿದರು.

ಪಟ್ಟಣದ ಪುರಸಭೆ ಬಸ್ ನಿಲ್ದಾಣದಲ್ಲಿಪುರಸಭೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿ,‘‘ಪಟ್ಟಣದ ಪ್ರತಿ ವಾರ್ಡ್ ನಲ್ಲಿದಿನವೂ ಕಸ ಸಂಗ್ರಹ ವಾಹನಗಳು ಬರುತ್ತವೆ. ಈ ವಾಹನಗಳಿಗೆ ತ್ಯಾಜ್ಯವನ್ನು 4 ಭಾಗದಲ್ಲಿವಿಂಗಡಿಸಿ ನೀಡಬೇಕು,’’ ಎಂದರು.

ಪುರಸಭೆಯ ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಮೇಲ್ವಿಚಾರಕರು, ಸಮುದಾಯ ಸಂಘಟಕರು, ಸಾರ್ವಜನಿಕರು ಇದ್ದರು.

* ಬಿಎಲ್ ವೈ 29 ಎಸ್ಡಿಆರ್ 2:

ಸಂಡೂರಿನ ಪುರಸಭೆ ಬಸ್ ನಿಲ್ದಾಣದಲ್ಲಿಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ನಡೆಯಿತು. ಪರಿಸರ ಎಂಜಿನಿಯರ್ ಅನ್ನಪೂರ್ಣ ಇದ್ದರು.