ಬಜಾರಿಗೆ ಬಂದ ಕಬೀರ
--
ಜಿ.ಪಿ.ಬಸವರಾಜು
--
ಬಜಾರಿಗೆ ಬಂದ ಕಬೀರ
ಜನಜಾತ್ರೆ ಹೆಜ್ಜೆಯೂರಲೂ
ಇರಲಿಲ್ಲತಾವು; ಯಾರೋ
ತಳ್ಳಿದರು, ನೂಕಿದರು ಮತ್ತಾರೊ
ಏಕತಾರಿ ಮಿಡಿಯಿತು ಮೆಲು
ದನಿಯಲ್ಲಿ; ಹುಚ್ಚುಹುಡುಗನ
ಕಣ್ಣಲ್ಲಿನಕ್ಕ ಕಬೀರ;
ತರಂಗಗಳೆದ್ದು ತುಂಬಿತು ನಾದ
ನಾದಕ್ಕೆ ತಲೆಬಾಗಿ ಬಂದನೊಬ್ಬ
ನೂಕು ನುಗ್ಗಲಲ್ಲೇ ಕೈಮುಗಿದ,
ಚಿಪುತ್ರ್ಪಬಾಳೆಯ ಹಣ್ಣ ಕೊಟ್ಟು
ದಾರಿಬಿಟ್ಟರು ಜನ ನಿರಾಳ ಕಬೀರ
ನಕ್ಕು ನುಡಿಸಿದ ತನ್ನೊಳದನಿಯ
ಹಾಡಿಗೆ ಜನ ಮರಳು, ಕಾಡಿದರು
ಬೇಡಿದರು, ‘ಬಾಬಾ ಕೊಡು ನಮಗೆ
ಸಕಲ ಸಂಪತ್ತು, ಕೊನೆಗಾಲದ ಸುಖ’ ,
ಮೆಲ್ಲಗೆ ಕಾಲ್ತೆಗೆದ ಕಬೀರ ಅಲ್ಲಿಂದ
ಒಂಟಿ ಪಯಣದ ಹಾದಿ, ತೋರಿತ್ತು
ಬೆಟ್ಟದ ತುಟ್ಟ ತುದಿಯ, ದಣಿವಿಲ್ಲ,
ದಾಹ ಇದ್ದೇ ಇತ್ತು, ಮೀಟುವ ತಂತಿಯ
ಆಟ ನಡೆದೆ ಇತ್ತು ಅಂತರಂಗದಲ್ಲಿ
ತೇಲುತ್ತ ತೇಲುತ್ತ ಬಂದ ಮೋಡಗಳು
ಮೈಸವರಿ ಹೋದವು ಮರುಳು ಮಾಡಿ
ಇಳಿಮುಖದ ಸೂರ್ಯ ಮರೆಯಾಗಿ
ಬಾನು ತುಂಬಿತು ಬಣ್ಣಬಣ್ಣಗಳಲ್ಲಿ
ಗೂಡತ್ತ ಹೊರಟವು ದಣಿದ ಹಕ್ಕಿ
ಎದೆಯ ತೆರೆಯುತ್ತ ಎಲ್ಲತುಂಬುತ್ತ
ಅಂದ ಕಬೀರ: ಭ್ರಮೆಯಲ್ಲ, ಮಾಯೆ
ಅಲ್ಲಈ ಜಗದ ವ್ಯಾಪಾರ, ಸತ್ಯದವತಾರ
ನೀರಗುಳ್ಳೆಯೂ ನಿಜ, ಹುಲ್ಲುಕಡ್ಡಿಯೂ,
ನೂಕು ನುಗ್ಗಲು ನಿಜ, ಅಲ್ಲಿಂದ ಎದ್ದುಬಂದ
ಏಕಾಂತವೂ ನಿಜ, ಈ ಜಗವೆಂಬುದು ನಿಜ
( ಕಬೀರರ ಒಂದು ಭಜನ್ ಕೇಳಿ )

