ಚಾಮರಾಜನಗರ ಕೊಳದ ಬೀದಿ ಗಣಪತಿ ದೇವಸ್ಥಾನದ ಬಳಿ ಹ್ಯಾಬಿಟ್ ಫೌಂಡೇಶನ್ ವತಿಯಿಂದ ಗೌರಿ-ಗಣೇಶ ಹಬ್ಬದ ಅಂಗವಾಗಿ ಎರಡನೆ ವರ್ಷದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆ ನಡೆಸಲಾಯಿತು. ಭಾಗವಹಿಸಿದ್ದ ಎಲ್ಲಾಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ವಿಜೇತ ಮಕ್ಕಳಿಗೆ ಪದಕ ಮತ್ತು ಪ್ರಶಂಸಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯ ಅತಿಥಿಗಳಾಗಿ ಗುಡ್ ಹ್ಯಾಬಿಟ್ ಫೌಂಡೇಶನ್ ಸಲಹಾ ಸಮಿತಿ ಸದಸ್ಯ ಡಾ. ಜಗದೀಶ್ , ಅಧ್ಯಕ್ಷ ಮನೋಜ್ , ಕಾರ್ಯಕ್ರಮ ನಿರ್ವಾಹಕ ವಿಜಯ್ ಪ್ರಸಾದ್ , ಸ್ವಯಂ ಸೇವಕ ಸಂಯೋಜಕಿ ಕೃತಿಕಾ ಹಾಗೂ ಸ್ವಯಂ ಸೇವಕರಾದ ವಿಕಾಸ್ , ವೀರೇಶ್ , ರೀತಿಕಾ, ಸುನಿಲ್ ಹಾಜರಿದ್ದರು.