ಸೆಪ್ಟೆಂಬರ್ 12ರ ಬೋಧಿವೃಕ್ಷ ಸಂಚಿಕೆಯಲ್ಲಿಪ್ರಕಟವಾದ ‘ಪಾಲಿಸು ಗಜವದನ‘ ಲೇಖನಗಳು ಸಕಾಲಿಕ. ವರ್ಷಕ್ಕೊಮ್ಮೆ ಬಂದು ಭಕ್ತರಲ್ಲಿಸಂತಸ ಮೂಡಿಸುವ, ಸ್ವಾತಂತ್ರ್ಯ ಚಳುವಳಿಗೆ ಶಕ್ತಿ ತುಂಬಿದ, ದೇಶ ವಿದೇಶಗಳಲ್ಲಿಯೂ ಭಕ್ತರನ್ನು ಹೊಂದಿದ ಮೋದಕ ಪ್ರಿಯನ ಕುರಿತಾದ ಲೇಖನ ಮನಸ್ಸಿಗೆ ಮುದ ನೀಡಿತು.ಎಸ್ ಜಿ ಹವಾಲ್ದಾರ |ನವನಗರ ಬಾಗಲಕೋಟೆ
---
ಚಿತ್ರ -ಬರಹ ಆಕರ್ಷಕ
ಸೆಪ್ಟೆಂಬರ್ 12-18 ರ ಬೋಧಿವೃಕ್ಷ ಆಕರ್ಷಕವಾಗಿ ಮೂಡಿಬಂದಿದೆ. ಗೌರಿ ಗಣೇಶ ಹಬ್ಬಗಳ ಕುರಿತ ಚಿತ್ರ ಬರಹಗಳು ವಿಚಾರಪ್ರದವಾಗಿ ಗಮನಸೆಳೆಯುವಂತಿದ್ದವು. ಅಬಾಲಹವೃದ್ಧರಾದಿಯಾಗಿ ಎಲ್ಲರ ಮೆಚ್ಚಿನ ದೇವರಾದ ಗಣೇಶನನ್ನು ಕುರಿತ ಬರಹಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.