ವಿಕ ಸುದ್ದಿಲೋಕ ಸುಳ್ಯ
ಯುವಕನೋರ್ವ ನೆಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಪೆರುವಾಜೆಯಲ್ಲಿನಡೆದಿದೆ.
ಕಳಂಜ ಗ್ರಾಮದ ಕೇಶವ ರೈ ಮತ್ತು ಸುಕನ್ಯಾ ಅವರ ಪುತ್ರ ಗಗನ್ (17) ಪೆರುವಾಜೆಯ ಬಾಡಿಗೆ ಮನೆಯೊಂದರಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ಳಾರೆಯ ಕೋಲ್ಡ್ ಹೌಸ್ ಒಂದರಲ್ಲಿಕೆಲಸಕ್ಕೆ ಇದ್ದ ಯುವಕ ಬುಧವಾರ ರಾತ್ರಿ ಕೃತ್ಯ ಎಸಗಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದ ಬೆಳ್ಳಾರೆ ಠಾಣೆಯ ಪೊಲೀಸರು ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

